ರಾಜ್ಯದಲ್ಲಿ ಇಂದು 1,217 ಕೊರೋನಾ ಪ್ರಕರಣ ಪತ್ತೆ; 25 ಮಂದಿ ಸಾವು!

ಬೆಂಗಳೂರು: ರಾಜ್ಯದಲ್ಲಿಂದು 1217 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 25 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ಬಿಡುಗಡೆ ಮಾಡಿದ್ದು,1198 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 28,93,715 ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ 25 ಮಂದಿ ಬಲಿಯಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 37,318ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.
ಇನ್ನೂ ಬೆಂಗಳೂರಿನಲ್ಲಿ ಇಂದು 287 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,37,837ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ ಇಂದು 1,28,657 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 1,217 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 0.94ಕ್ಕೆ ಇಳಿದಿದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ ನೋಡುವುದಾದರೆ, ಬಾಗಲಕೋಟೆ-0, ಬಳ್ಳಾರಿ-0, ಬೆಳಗಾವಿ-17, ಬೆಂಗಳೂರು ಗ್ರಾಮಾಂತರ-18, ಬೆಂಗಳೂರು ನಗರ-287, ಬೀದರ್-0, ಚಾಮರಾಜನಗರ-5, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-25, ಚಿತ್ರದುರ್ಗ-8, ದಕ್ಷಿಣ ಕನ್ನಡ-224, ದಾವಣಗೆರೆ-10, ಧಾರವಾಡ-9, ಗದಗ-1, ಹಾಸನ-56, ಹಾವೇರಿ-1, ಕಲಬುರಗಿ-3, ಕೊಡಗು-89, ಕೋಲಾರ-55, ಕೊಪ್ಪಳ-1, ಮಂಡ್ಯ-11, ಮೈಸೂರು-127, ರಾಯಚೂರು-0, ರಾಮನಗರ-6, ಶಿವಮೊಗ್ಗ-36, ತುಮಕೂರು-30, ಉಡುಪಿ-150, ಉತ್ತರ ಕನ್ನಡ-41, ವಿಜಯಪುರ-4, ಯಾದಗಿರಿ-1 ಪ್ರಕರಣ ಪತ್ತೆಯಾಗಿದೆ.